ಬುದ್ದಿಮಾತು - Kannada Stories Kannada
ಬುದ್ದಿಮಾತು
ಒಂದೂರಿನಲ್ಲಿ ಒಬ್ಬ ಕವಿ ಇದ್ದ. ಅವನು ಯಾವಾಗಲೂ ತನ್ನಷ್ಟಕ್ಕೆ ಮಾತನಾಡಿಕೊಂಡು ತಿರುಗಾಡುತ್ತಿದ್ದ. ಅವನೇ ಪ್ರಶ್ನೆ ಕೇಳುತ್ತಿದ್ದ. ಪ್ರಶ್ನೆಗಳಿಗೆ ಅವನೇ ಉತ್ತರ ಕೊಡುತ್ತಿದ್ದ. ಯಾರಾದರೂ ಅವನ ಮಾತು ಮಾತ್ರ ಕೇಳಿಸಿಕೊಂಡರೆ, ಯಾರೋ ಇಬ್ಬರು ಮಾತನಾಡ ಕೊಳ್ಳುತ್ತಿರುವಂತೆ ಅವರಿಗೆ ಅನಿಸುತ್ತಿತ್ತು.
ಒಂದು ದಿನ ಯಾರೂ ಅವನನ್ನು ತಡೆದು ಕೇಳಿ ದರು." ಅಯ್ಯಾ, ನೀವು ನಿಮ್ಮಷ್ಟಕ್ಕೆ ಯಾಕೆ ಮಾತನಾಡುತ್ತಿದೀರಿ?" ಕವಿ ನಕ್ಕು ಉತ್ತರಿಸಿದ. "ಅದಕ್ಕೆ ಎರಡು ಕಾರಣ ಇದೆ, ಸ್ವಾಮೀ. ಒಂದು, ನನಗೆ ಬುದ್ದಿವಂತರ ಜೊತೆಗೆ ಮಾತನಾಡಲು ಇಷ್ಟವಾಗುತ್ತದೆ. ಎರಡನೆಯದು ನನಗೆ ಬುದ್ದಿವಂತರ ಮಾತು ಕೇಳಲು ಇಷ್ಟವಾಗುತ್ತದೆ. ಅವೆರಡುವು ನಾನೀ ಆಗಿರುವಾಗ ಬೇರೆಯವರ ಜೊತೆ ಯಾಕೆ ವ್ಯರ್ಥ ಸಮಯ ಕಳೆಯಲಿ?"
0 comments: